Posts

Showing posts from October, 2021

ಅತಿಯಾಸೆ ಗತಿಗೇಡು

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು. ಹಾಗೂ ಇಂದಿನ ದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ👍🏼😊🙏🏼 🙏🏼🙏🏼ನಷ್ಟ ಜೀವನದಾಸೆ🙏🏼🙏🏼 ರಷ್ಯಾದ ಮಹಾನ್ ದಾರ್ಶನಿಕ ಹಾಗೂ ಲೇಖಕ ಲಿಯೊ ಟಾಲ್‌ಸ್ಟಾಯ್‌ನ ಅನೇಕ ಕಥೆಗಳು ಮನೋಜ್ಞವಾದವುಗಳು. ಅವುಗಳಲ್ಲಿ ಒಂದು ಹೀಗಿದೆ. ಒಂದು ಊರಿನಲ್ಲಿ ಜಮೀನುದಾರನಿದ್ದ. ಅವನಿಗೆ ತುಂಬು ಪರಿವಾರ.  ಅರಮನೆಯಂಥ ಮನೆ. ಇವನ ಇಷ್ಟಾನಿಷ್ಟಗಳನ್ನು ಪೂರೈಸಲು ಅನೇಕ ಸೇವಕರಿದ್ದರು. ಅವನ ನೂರಾರು ಎಕರೆ ಭೂಮಿಯಲ್ಲಿ ಬೆಳೆದ ಕೃಷಿ ಉತ್ಪನ್ನಗಳು ಅವನನ್ನು ಪ್ರತಿವರ್ಷ ಹೆಚ್ಚು ಶ್ರೀಮಂತನನ್ನಾಗಿ ಮಾಡುತ್ತಿದ್ದವು.  ಆದರೂ ಅವನಲ್ಲಿ ಏನೋ ಅತೃಪ್ತಿ, ದುಃಖ ಮನೆಮಾಡಿದ್ದವು. ಅವನಿಗೆ ತನ್ನ ಶ್ರೀಮಂತಿಕೆ ಸಾಲದೆಂಬ ಚಿಂತೆ. ತನ್ನ ಊರಿನಲ್ಲೇ ಇನ್ನೂ ಎಷ್ಟೊಂದು ಜಮೀನು ಖಾಲಿ ಇದೆ.  ಅದೆಲ್ಲ ತನ್ನದಾದರೆ ಎಷ್ಟು ಚೆಂದ! ಶ್ರೀಮಂತ ಚಿಂತಿಸಿ ರಾಜನ ಬಳಿಗೆ ಹೋದ. ಆ ರಾಜ ಮತ್ತು ತಾನು ಇಬ್ಬರೂ ಒಂದೇ ಶಾಲೆಯಲ್ಲಿ ಓದಿದವರು, ಆಗ ತುಂಬ ಆತ್ಮೀಯ ಸ್ನೇಹಿತರಾಗಿದ್ದವರು.  ಈಗಲೂ ಆ ಸ್ನೇಹ ಹಾಗೆಯೇ ಉಳಿದುಕೊಂಡಿತ್ತು. ಆ ಧೈರ್ಯದ ಮೇಲೆಯೇ ಶ್ರೀಮಂತ ರಾಜನ ಕಡೆಗೆ ಹೋದಾಗ ಅವನೂ ತುಂಬ ಸಲುಗೆ ತೋರಿಸಿದ.  ಆ ಮಾತು, ಈ ಮಾತು ಮುಗಿದ ಮೇಲೆ ರಾಜ ಬಂದ ವಿಷಯ ಕೇಳಿದ.  ಆಗ ಶ್ರೀಮಂತ ತನ್ನ ಬಯಕೆಯನ್ನು ತಿಳಿಸಿದ....

ಕೃಷ್ಣ ಮತ್ತು ದೇವಕಿ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲಾ ಆತ್ಮೀಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು ಹಾಗೂ ಈ ಶುಭದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ 👍🏼😊🙏🏼 🙏🏼🙏🏼ಪೂರ್ವ ಜನ್ಮದ ಫಲ🙏🏼🙏🏼 ಶ್ರೀ ಕೃಷ್ಣ ಕಂಸನನ್ನು ಕೊಂದ ನಂತರ ತನ್ನ ಮಾತಾ ಪಿತೃಗಳಾದ ವಾಸುದೇವ ಮತ್ತು ದೇವಕಿಯನ್ನು ಬಿಡುಗಡೆ ಮಾಡಲು ಅಲ್ಲಿನ ಸೆರೆಮನೆಗೆ ಹೋದ.   ತಾಯಿ ದೇವಕಿ ಉತ್ಸಾಹದಿಂದ ಕೇಳಿದಳು... ಮಗು... ನೀನೇ ದೇವರು ಮತ್ತು ನಿನಗೆ ದೈವಿಕ ಶಕ್ತಿಗಳಿವೆ ಹಾಗಾದರೆ ಕಂಸನನ್ನು ಕೊಂದು ನಮ್ಮನ್ನು ಬಿಡುಗಡೆ ಮಾಡಲು ನೀನು ಹದಿನಾಲ್ಕು ವರ್ಷ ಏಕೆ ಕಾಯುತ್ತಿದ್ದೆ ?  ಶ್ರೀಕೃಷ್ಣ ಉತ್ತರಿಸಿದ..  ದೇವಸ್ವರೂಪಿ ತಾಯಿಯೆ ನನ್ನನ್ನು ಕ್ಷಮಿಸಿ. ಆದರೆ ಕಳೆದ ಜನ್ಮದಲ್ಲಿ ಹದಿನಾಲ್ಕು ವರ್ಷಗಳ ಕಾಲ ನೀನು ನನ್ನನ್ನು ಕಾಡಿಗೆ ಏಕೆ ಕಳುಹಿಸಿದೆ? ದೇವಕಿಯು ಆಶ್ಚರ್ಯಚಕಿತಳಾಗಿ ಕೃಷ್ಣ, ಇದು ಹೇಗೆ ಸಾಧ್ಯ?  ನೀನು ಯಾಕೆ ಹೀಗೆ ಹೇಳುತ್ತಿದ್ದೀ..?  ಕೃಷ್ಣನು ಉತ್ತರಿಸಿದ...ಅಮ್ಮಾ ನಿಮ್ಮ ಹಿಂದಿನ ಜನ್ಮದ ಬಗ್ಗೆ ನಿಮಗೆ ಏನೂ ನೆನಪಿಲ್ಲ. ಆದರೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಕೈಕೇಯಿಯಾಗಿದ್ದೀರಿ ಮತ್ತು ನಿಮ್ಮ ಪತಿ ದಶರಥನಾಗಿದ್ದ. ದೇವಕಿಯು ಆಶ್ಚರ್ಯಚಕಿತಳಾದಳು ಮತ್ತು ಕುತೂಹಲದಿಂದ ಕೇಳಿದಳು ಹಾಗಾದರೆ‌ ಈಗ ಕೌಸಲ್ಯ ಯಾರು?  ಶ್ರೀ ಕೃಷ್ಣ ನಗುತ್ತ ಉತ್ತರಿಸಿದ... ತಾಯಿ ಯಶೋದಾ. ಹದಿನಾಲ್ಕು ವರ್ಷ...

ನಾನು ಮತ್ತು ತಂದೆ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು ಹಾಗೂ ಇಂದಿನ ದಿನದ ಈ ಒಂದು ಚಿಂತನೆ ನಮ್ಮೆಲ್ಲರಿಗಾಗಿ👍🏼🙏🏼😊 🙏🏼🙏🏼ಕುಟುಂಬಕ್ಕೆ ಕೊಡಬೇಕಾದ ಪ್ರೀತಿ🙏🏼🙏🏼 ಆ ಊರಿನಲ್ಲಿ ಒಂದು ಸರ್ಕಾರಿ ಶಾಲೆ ಇತ್ತು. ಅಲ್ಲಿದ್ದ ಒಬ್ಬ ಶಿಕ್ಷಕಿ ಬಹಳ ಶ್ರದ್ಧೆಯಿಂದ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಪ್ರತಿಯೊಂದು ಮಕ್ಕಳ ಮನಸ್ಸು ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅವರ ಸಮಸ್ಯೆಗಳಿದ್ದರೆ, ನಿಧಾನವಾಗಿ ಬಿಡಿಸಿ ಕೇಳಿ ಸಮಾಧಾನ ಪಡಿಸಿ ಅವುಗಳ ಮುಖದಲ್ಲಿ  ಮಂದಹಾಸ ಮೂಡಿಸುತ್ತಿದ್ದರು. ಪ್ರತಿ ತಿಂಗಳು ಆಯಾ ಮಕ್ಕಳ ಪೋಷಕರನ್ನು ಶಾಲೆಗೆ ಕರೆಸಿ ಸಭೆ ನಡೆಸಿ ಮಕ್ಕಳ ಓದು, ಆಟೋಟಗಳು, ಅಂಕಗಳು, ಹವ್ಯಾಸಗಳ ಕುರಿತು ಪೋಷಕರ ಜೊತೆ ಚರ್ಚೆ ನಡೆಸುತ್ತಿದ್ದರು. ಸಭೆ ನಿಗದಿಪಡಿಸಿದ ದಿನ ಸಾಧಾರಣವಾಗಿ ಎಲ್ಲಾ ಮಕ್ಕಳ ಪೋಷಕರು ಬರುತ್ತಿದ್ದರು. ಆದರೆ ಒಂದು ಮಗುವಿನ ತಂದೆ ಮಾತ್ರ ಎಂದೂ ಸಭೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ಶಿಕ್ಷಕಿ,  ಸಭೆಗೆ, ಮಗುವಿನ ತಂದೆ ಬರಲೇಬೇಕೆಂದು ಕಡ್ಡಾಯ ಮಾಡಿದರು. ಆದರೆ ಆ ಮಗುವಿನ ತಂದೆ ಸಮಯವಿಲ್ಲವೆಂದು ಹೇಳಿದರು. ಪಟ್ಟು ಬಿಡದ ಶಿಕ್ಷಕಿ ನಿಮ್ಮ ಸಮಯಕ್ಕೆ ನಾನು ಸಭೆ ಸೇರಿಸುತ್ತೇನೆ ಎಂದರು. ಆಗ ಮಗುವಿನ ತಂದೆ ಒಲ್ಲದ ಮನಸ್ಸಿನಿಂದ ಒಪ್ಪಿ ಸಭೆಗೆ ಬಂದರು.  ಸಭೆಗೆ ಬಂದಾಗಲೂ ಆತನು, ಶಿಕ್ಷಕಿಗೆ...

ಕೇವಲ what's up ಮೂಲಕ cowid vacation certificate ಸುಲಭವಾಗಿ ಪಡೆಯುವುದು

Image
 *COWID VACATION CERTIFICATE ಪಡೆಯುವುದು  ಹೇಗೆ?* *ಬಹಳ ಸುಲಭ#$dnk#$* 1️⃣ Step *9013151515 ಈ ನಂಬರ್ ( *COWIN HELP DESK NUMBER* ) ಸೇವ್ ಮಾಡಿ,*  2️⃣Step *whatsapp ನಲ್ಲಿ Certificate ಅಂತ type ಮಾಡಿ* 3️⃣Step *Generating an otp msg ಬರುತ್ತೆ*  4️⃣Step  *ತಕ್ಷಣ ನಿಮ್ಮ ಮೋಬೈಲ್ OTP ಬಂದ ನಂತರ OTP ENTRY ಮಾಡಿ* 5️⃣ ನಿಮ್ಮ ಮೋಬೈಲ್ ಗೆ registered ವ್ಯಕ್ತಿ ಹೆಸರು ತೋರಿಸುತ್ತದೆ Ex:-1)xxxxxxx        2)yyyyyy   6️⃣Step *SL no, entry ಮಾಡಿ* ಪ್ರಮಾಣಪತ್ರ ಬರುತ್ತದೆ,

ಕೇವಲ whatsup ಸಂದೇಶದ Cowid vacation certificate ಪಡೆಯುವದು

Image
*COWID VACATION CERTIFICATE ಪಡೆಯುವುದು  ಹೇಗೆ?* *ಬಹಳ ಸುಲಭ#$dnk#$* 1️⃣ Step *9013151515 ಈ ನಂಬರ್ ( *COWIN HELP DESK NUMBER* ) ಸೇವ್ ಮಾಡಿ,*  2️⃣Step *whatsapp ನಲ್ಲಿ Certificate ಅಂತ type ಮಾಡಿ* 3️⃣Step *Generating an otp msg ಬರುತ್ತೆ*  4️⃣Step  *ತಕ್ಷಣ ನಿಮ್ಮ ಮೋಬೈಲ್ OTP ಬಂದ ನಂತರ OTP ENTRY ಮಾಡಿ* 5️⃣ ನಿಮ್ಮ ಮೋಬೈಲ್ ಗೆ registered ವ್ಯಕ್ತಿ ಹೆಸರು ತೋರಿಸುತ್ತದೆ Ex:-1)xxxxxxx        2)yyyyyy   6️⃣Step *SL no, entry ಮಾಡಿ* ಪ್ರಮಾಣಪತ್ರ ಬರುತ್ತದೆ,  

ಚಹ ಮಾರುವನ &ಸೈನಿಕರ ಕಥೆ

 ಪೂಜ್ಯ ಗುರುಹಿರಿಯರೆ ಹಾಗೂ ನನ್ನೆಲ್ಲ ನಲ್ಮೆಯ ಸ್ನೇಹಿತ ಮಿತ್ರರೇ ನಿಮ್ಮೆಲ್ಲರಿಗೂ ಈ ಶುಭ ಮುಂಜಾನೆಯ ಶರಣು ಶರಣಾರ್ಥಿಗಳು. ಹಾಗೂ ಈ ಶುಭ ದಿನದ   ಒಂದು ಚಿಂತನೆ ನಮ್ಮೆಲ್ಲರಿಗಾಗಿ 🙏🏼🙏🏼ಗುಣವಿದ್ದರೆ ಯಾರು ಬೇಕಾದರೂ ದೇವರಾಗಬಹುದು🙏🏼🙏🏼 ಇದೊಂದು ಸೈನಿಕರ ಕಥೆ. ಹಿಮಾಲಯದ ಶಿಖರದಲ್ಲಿ ಒಂದಷ್ಟು ಸೈನಿಕರ ತಂಡ ಯಾವಾಗಲೂ ಕಾವಲಿರಬೇಕು. ಕಾವಲಿರುವುದು ಎಂದರೆ, ಒಂದು ದಿನ ಅರ್ಧ ದಿನ ಅನ್ನುವಂತಿಲ್ಲ. ಮೂರು ತಿಂಗಳು ಕೊರೆಯುವ ಚಳಿಯಲ್ಲಿ, ಕಟಕಟ ಹಲ್ಲು ಕಡಿಯುತ್ತಾ, ಮೈಮೇಲೆ ಎರಚುವ ಮಳೆಯಲ್ಲಿ ನೆನೆಯುತ್ತಾ,ಬೇಕೆನಿಸಿದರೂ ಬಿಸಿಬಿಸಿಯಾದ ಒಂದು ಟೀ ಕಾಫಿ ಇಲ್ಲದ ಸ್ಥಳದಲ್ಲಿ, ಮೂರು ತಿಂಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಇರಬೇಕು. ಇದೊಂದು ಪ್ರಕ್ರಿಯೆ ಇದ್ದ ಹಾಗೆ, ಒಂದು ತಂಡ ಬಂದು ಕಾಯುತ್ತಿರುವಾಗ ಮೂರು ತಿಂಗಳು ಮುಗಿದ ನಂತರ ಮತ್ತೊಂದು ತಂಡ ಬರುತ್ತದೆ. ಇದೇ ತರಹ ಮೂರು ಮೂರು ತಿಂಗಳಿಗೊಮ್ಮೆ ಒಬ್ಬ ಮೇಜರ್ ನಲ್ಲಿ ನೇತೃತ್ವ ದಲ್ಲಿ 15 ಜನರ ತಂಡ ಇಲ್ಲಿಗೆ ಬರುತ್ತದೆ. ಮೊದಲು ಕಾಯುತ್ತಿರುವ ತಂಡ ಇನ್ನೊಂದು ತಂಡ ಯಾವಾಗ ಬರುತ್ತದೆ ಎಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತಾರೆ. ಕುಟುಂಬದವರ ಆಗಲಿ ಅಥವಾ ಇಲ್ಲಿ ಕಾಯಲು ಬಂದವರಿಗಾಗಲಿ ಕ್ಷೇಮವಾಗಿ  ವಾಪಸ್ಸು ಹೋಗುತ್ತೇವೆ ಎಂಬ ನಂಬಿಕೆ ಇರುವುದಿಲ್ಲ. ಹಿಮಾಲಯದ ಶಿಖರದ ಮೇಲೆ ಹೋಗಿ ಮೂರು ತಿಂಗಳು ಕಾಯುವ ಕೆಲಸ ಅಂದರೆ ಸೈನಿಕರ ಶಕ್ತಿಯ ಸತ್ವಪರೀಕ್ಷೆಯೇ...